ನೆರೆ- ಬರ ತಡೆಗಟ್ಟಲು ಗಿಡ ನೆಡಲು ಮುಂದಾಗಿ

ಕಾಳಗಿ : ಇಂದಿನ ತಂತ್ರಜ್ಞಾನ ಯುಗದಲ್ಲಿ ಪರಿಸರ ವಿನಾಶದತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕೋಡ್ಲಿ ಹೀರೆಮಠದ ಬಸವಲಿಂಗ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಲಯದ ಆವರಣದಲ್ಲಿ 150 ಸಸಿ ನೆಡುವ ಮೂಲಕ ಲಿಂಗೈಕ್ಯ ದಿ. ಕಂಟೇಪ್ಪ ಮಾಸ್ಟರ್ ಅವರ 10ನೇ ಪುಣ್ಯ ಸ್ಮರಣೆ ನಿಮಿತ್ಯ ಸಮೃದ್ಧಿ ಫೌಂಡೇಶನ್ ಹಾಗೂ ರೇವಣಸಿದ್ದೇಶ್ವರ ಜೀರ್ಣೋದ್ಧಾರ ಸೇವಾ ಸಂಸ್ಥೆ ಹಮ್ಮಿಕೊಂಡ ಮರ ಬೆಳೆಸಿ – ನಾಡು ಉಳಿಸಿ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಮನೆಗೊಂದು ಮರ ಬೆಳೆಸಿ ನಾಡು ಉಳಿಸಲು ಮುಂದಾಗಬೇಕು ಎಂದರು.

ಪ್ರಸ್ತುತ ಕಲ್ಯಾಣ ನಾಡಿನಲ್ಲಿ ನೆರೆ-ಬರ ಉಂಟಾಗಲು ಮನುಷ್ಯ ಜೀವಿಗಳೆ ಕಾರಣಿಭೂತರಾಗಿದ್ದು, ನಮ್ಮ ತಪ್ಪುಗಳು ತಿದ್ದಿಕೊಂಡು ಸಮಾಜದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಿ ಬೆಳೆಸಲು ಸಜ್ಜಾಗಬೇಕು. ಸಮೃದ್ಧಿ ಫೌಂಡೇಶನ್ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಶೇಶಿಕಾಂತ ಆಡಕಿ, ರಾಜಕುಮಾರ ಚಿಕ್ಕ ಅಗಸಿ, ಶರಣು ಬುಬಲಿ,ಅಣ್ಣರಾವ ಪೇದ್ದಿ, ಮಲ್ಲಪ್ಪ ಚಿಂತಕೋಟಿ, ವಿಜಯಕುಮಾರ ಚೆಂಗಟಿ, ಡಾ. ಪಾಟೀಲ, ಎನ್. ಎಸ್.ಪಾಟೀಲ್, ಶಿವಕುಮಾರ ಸುಲೇಪೇಟ, ಶಿವಶಣಪ್ಪ ಸಜ್ಜನಶೇಟ್ಟಿ, ಮಲ್ಲು ಮರಗುತ್ತಿ, ಮಲ್ಲಿಕಾರ್ಜುನ ಚಿಕ್ಕ ಅಗಸಿ, ಸಿದ್ದು ಕಂತಿ, ಮಲ್ಲು ಜುಜ್ಜಿ ಹಾಗೂ ಜೀವನ ಸಾಧನೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರ ವೃಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ತೆಂಗಿನ ಹಾಗೂ ಮಣ್ಣಿನ ಗಣಪನನ್ನು ಆರಾಧಿಸಿ ನೈಸರ್ಗಿಕ ಜಲಮುಲಗಳನ್ನು ರಕ್ಷಿ‌ಸಿ…..

ಸ್ವರ್ಣಗೌರಿ ಹಾಗೂ ಗೌರಿ ಗಣೇಶ ಚೌತಿ ಹಬ್ಬದ ಹಿನ್ನೆಲೆಯಲ್ಲಿ ಪಿ.ಓ.ಪಿ ಗಣೇಶ ವಿಗ್ರಹಗಳು ಭಕ್ತರು ಕೈ ಸೇರಲು ಮಾರುಕಟ್ಟೆಯಲ್ಲಿ ಕಾದು ಕುಳಿತಿವೆ.
ಪಿ.ಓ.ಪಿ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ, ವಿಗ್ರಹಕ್ಕೆ ಹಚ್ಚಿರುವ ಬಣ್ಣವು ವಿಷಕಾರಿ, ರಾಸಾಯನಿಕ, ಲೋಹ, ಲೇಪನದಿಂದ ಕುಡಿರುತ್ತದೆ. ಇಂತಹ ಪ್ಲಾಸ್ಟರ್ ಆಫ್ ಪ್ಯಾರಿಸನ್ ಗಣೇಶನ ಮುರ್ತಿಯನ್ನು ನೈಸರ್ಗಿಕ ಬಾವಿ, ಕೆರೆ-ಕಟ್ಟೆ ಹಾಗೂ ನದಿಗಳಲ್ಲಿ ವಿಸರ್ಜನೆ ಮಾಡಿದರೆ ನೀರಿನ ಮಾಲಿನ್ಯವಾಗುವುದಲ್ಲದೆ ಜೀವಿಗಳ ಬದುಕಿಗೆ ವಿಘ್ನವಾಗುತ್ತದೆ. ಹಾಗೂ ಅಂತರ್ಜಾಲ ಕುಡಿಯುವ ನೀರಿನ ಸೆಲೆ ಬತ್ತಿ ಹೋಗುವ ಸಾಧ್ಯತೆ ಇರುತ್ತದೆ. ವಿಘ್ನಗಳನ್ನು ನಿವಾರಿಸು ಎಂದು ಪುಜಿಸಿ ಆರಾಧಿಸಬೇಕಾದ ನಾವುಗಳು ಗಣೇಶ ಹಬ್ಬವನ್ನು ಯಾವುದೇ ವಿಘ್ನಗಳನ್ನು ಉಂಟಾಗದಂತೆ ನಿಸರ್ಗದ ಸಮತೋಲನವನ್ನು ಕಾಪಾಡಿಕೊಂಡು ಆಚರಿಸಿದರೆ ಮಾತ್ರ ಹಬ್ಬ ಅರ್ಥಪೂರ್ಣವಾಗುತ್ತದೆ.
ಭಕ್ತರು ಹಬ್ಬದಲ್ಲಿ ಬಣ್ಣ ರಹಿತ,ತೆಂಗಿನ ಅಥವಾ ಸಸ್ಯರಸದ ಬಣ್ಣ ಹಚ್ಚಿದ ಸಾದಾ ಜೇಡಿಮಣ್ಣಿನ ಮುದ್ದಾದ ಚಿಕ್ಕ ಗಣಪತಿಯನ್ನು ತಯ್ಯಾರಿಸಿ ಪುಜೀಸುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಮುಂದಾಗಬೇಕು. ಎಂಬುದೇ ಸಮೃದ್ಧಿ ಫೌಂಡೇಶನ್ ಆಶಯವಾಗಿದೆ.

ಬನ್ನಿ ಭಾಗವಹಿಸಿ ನಮ್ಮೊಂದಿಗೆ ಕೈಜೋಡಿಸಿ ಪರಿಸರ ಸಂರಕ್ಷಣೆಗೆ ಮುಂದಾಗಿ ನೆರೆ-ಬರ ತಡೆಗಟ್ಟಲು ಕೃಷ್ಣಾ, ಭೀಮಾ, ಭೊಗಾವತಿ ಸೇರಿದಂತೆ ಇತರೆ ನದಿಯ ಮುಲಗಳ ಉಳುವಿಗಾಗಿ ಅಭಿಯಾನ….

ಸಮೃದ್ಧಿ ಫೌಂಡೇಶನ್

ತೆಂಗಿನ ಗಣಪನನ್ನು ಪ್ರತಿಷ್ಠಾಸಿ ಅಭಿಯಾನ ಪ್ರಾರಂಭಿಸೋಣ ಬನ್ನಿ ಭಾಗವಹಿಸಿ…

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಆದ್ದರಿಂದ ಪ್ರಸ್ತುತ ನೆರೆ-ಬರ ತಡೆಗಟ್ಟಲು ಮುಂದಾಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಣೇಶ ಚತುರ್ಥಿ ಸಂಭ್ರಮವು ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಂಕಲ್ಪ ತೊಟ್ಟು ಪ್ರತಿಯೊಬ್ಬರೂ ಪರಿಸರ ಗಣಪತಿ ಪ್ರತಿಷ್ಠಾಪನೆಗೆ ಮುಂದಾಗಿ ತೆಂಗಿನ ಹಾಗೂ ಮಣ್ಣಿನ ಗಣಪನನ್ನು ಪ್ರತಿಷ್ಠಾಸಿ ಆರಾಧಿಸಬೇಕು ಎಂಬುದೇ ಸಮೃದ್ಧಿ ಫೌಂಡೇಶನ್ ಕಳಕಳಿಯ ಅಭಿಯಾನವಾಗಿದೆ. ನಿಮ್ಮೊಂದಿಗೆ ಕೈಜೋಡಿಸಿ ಪರಿಸರ ಸಂರಕ್ಷಣೆಗೆ ಮುಂದಾಗಿ…

ತೆಂಗಿನ ಗಣಪನ ತಯ್ಯಾರಕರು, ಮಾರಾಟಗಾರರು ಸಮೃದ್ಧಿ ಫೌಂಡೇಶನ್ ಸಂಚಾಲಕ ಪ್ರಸಾದ್ ಸಾಲಿಮಠ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ …

ಸಮೃದ್ಧಿ ಫೌಂಡೇಶನ ಜನಾಂದೋಲನ

ಕಲ್ಯಾಣ ನಾಡಿನ ಕೃಷ್ಣಾ, ಭೀಮಾ ಇತರೆ ನದಿ ಮೂಲಗಳ ಉಳುವಿಗಾಗಿ ಯುವಕರು ಒಗ್ಗೂಡಿ ಸಮೃದ್ಧಿ ಎಂಬ ತಲೆ ಬರಹದೊಂದಿಗೆ ಪ್ರತಿ ಹಳ್ಳಿ ಹಳ್ಳಿಯಲ್ಲಿ ಸಂಚರಿಸಿ ಜನತೆಯಲ್ಲಿ ಪರಿಸರ, ಜೀವ ಜಲ, ನಾಡು, ನುಡಿ, ದೇಶದ ಸಂಸ್ಕ್ರುತಿ, ಪರಂಪರೆ ಕುರಿತು ಜಾಗೃತಿ ಮೂಡಿಸುತ್ತ ಜನಾಂದೋಲನಕ್ಕೆ ಮುನ್ನೂಡಿ ಬರೆಯುತ್ತಿದ್ದಾರೆ.

ಈಗಾಗಲೇ ಕನ್ನಡ ನಾಡಿನ ಅತಿ ಹಿಂದುಳಿದ ಪ್ರದೇಶವಾದ ಚಿಂಚೋಳಿ ಮತಕ್ಷೇತ್ರದಿಂದ ಪ್ರಾರಂಭಗೊಳಿಸಿ ಕಳೆದ ಎರೆಡು ಸಮತ್ಸರಗಳಿಂದ ಪ್ರತಿ ಹಳ್ಳಿಗಳಿಗೆ ತೆರಳಿ ಮರ ಬೆಳೆಸಿ ನಾಡು ಉಳಿಸುವಂತೆ ಜಾಗೃತಿ ಮೂಡಿಸುತ್ತ ಜನರಲ್ಲಿ ಐಕ್ಯತೆಯ ಸಂದೇಶವನ್ನು ಸಾರುತ್ತಿದ್ದಾರೆ.

ಕಳೆದ ಎರೆಡು ಸಮತ್ಸರಗಳಿಂದ ಯುವಕರು ಮತಕ್ಷೇತ್ರದ ರಟಕಲ್, ಧುತ್ತರಗಾ, ಕೋಡ್ಲಿ, ಚೆಂಗಟಾ, ಸೋಮಲಿಂಗದಳ್ಳಿ, ಭಕ್ತಂಪಳ್ಳಿ, ಚಂದನಕೇರಾ, ಮಿರಿಯಾಣ, ಕನಕಪೂರ್, ಚಂದಾಪೂರ್, ಚಿಂಚೋಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಗ್ರಾಮಸ್ಥರಲ್ಲಿ ಹಾಗೂ ಶಾಲಾ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಜನಾಂದೋಲನ ನಡೆಸುವ ಮೂಲಕ ಪರಿಸರ ಉಳುವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾದುದು.

ಅದೇ ರೀತಿ ಕಾನೂನು ಅರಿವು, ಪ್ಲಾಸ್ಟೀಕ್ ಮುಕ್ತ ಭಾರತಕ್ಕಾಗಿ, ರಕ್ತದಾನ ಶಿಬಿರಗಳು ಸೇರಿದಂತೆ ವಿವಿಧ ಸಮಾಜ ಮುಖಿ ಸೇವೆಗಳು ಯಾವುದೇ ಫಲಾ ಪೇಕ್ಷೆ ಇಲ್ಲದೆ. ನಿರಂತರವಾಗಿ ಜನಾಂದೋಲನ ನಡೆಸುತ್ತಿದ್ದು, ಇಂತಹ ಸಮಾಜಮುಖಿ ಚಟುವಟಿಕೆಗಳಿಗೆ ಚುನಾಯಿತ ಪ್ರತಿನಿಧಿಗಳು, ವಿವಿಧ ಪರ ಸಂಘಟನೆಗಳು, ಅಧಿಕಾರಿಗಳು ಪ್ರೋತ್ಸಾಹಿಸಿ ಕೈಜೋಡಿಸಿದರೇ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂಬುದೇ ಸಮೃದ್ಧಿ ಫೌಂಡೇಶನ ಆಶಯವಾಗಿದೆ.

ನಾಡಿನ ಸಮೃದ್ಧಿಗಾಗಿ ಪ್ರತಿಯೊಬ್ಬರು ಇಂದಿನಿಂದಲೇ ಮನೆಗೊಂದು ಮರ ಬೆಳೆಸಿ ಊರಿಗೊಂದು ವನ ರೂಪಿಸಲು ಸಂಕಲ್ಪ ತೊಡುವ ಮೂಲಕ ನದಿ ಮೂಲಗಳ ಸುತ್ತಮುತ್ತಲು ಮರಗಳನ್ನು ಬೆಳೆಸಿ ನೆರೆ-ಬರ ತಡೆಗಟ್ಟಲು ಮುಂದಾಗಬೇಕು

-ಸಮೃದ್ಧಿ ಫೌಂಡೇಶನ